Monday, April 23, 2012


( ಈ ಹಾಡು, "ಗೆಳೆಯ" ಚಿತ್ರದ "ಈ ಸಂಜೆ ಯಾಕಾಗಿದೆ.." ಎಂಬ ಹಾಡಿನ ರಾಗದಲ್ಲಿ ಬರೆದ ಹೊಸ ಸಾಹಿತ್ಯ..)


ಬಾ ಒಮ್ಮೆ ಕಣ್ಣಂಚಿಗೆ ನೀ ಕಾಡದೆ.. ಬಾ ಒಮ್ಮೆ ಕಣ್ಣಂಚಿಗೆ...
ಸಾವೀಗ ನನ್ನಂಚೆಗೆ ಮಾತಾಡದೆ.. ಸಾವೀಗ ನನ್ನಂಚೆಗೆ..

ನೋವಲ್ಲಿಯೇ ಬೆರೆತಾಗಿದೆ..
ಈಗೆಲ್ಲವೂ ಬರಿದಾಗಿದೆ..
ಹೂವಂತೆ ಕಂಪಿಲ್ಲದೇ...  ಹೂವಂತೆ ಕಂಪಿಲ್ಲದೇ...||




ಬಾ ಒಮ್ಮೆ ಕಣ್ಣಂಚಿಗೆ ನೀ ಕಾಡದೆ.. ಬಾ ಒಮ್ಮೆ ಕಣ್ಣಂಚಿಗೆ...






ಬೇಜಾರಿನ ತುಸುತಾಪಕೆ ಎದೆಯಾಳದಿ ರೂಪಾಂತರ..
ಕನಸಲ್ಲಿಯೇ ಒಂದಾದರೂ ಇನ್ನೇತಕೆ ಈ ಅಂತರ..
ಉಸಿರಾಡದೆ ಮಿಡಿವ ಮನ..
ಹೊರಳಾಡಿದೆ ಬಡಜೀವನ..
ಮೀನಂತೆ ನೀರಿಲ್ಲದೆ.. ಮೀನಂತೆ ನೀರಿಲ್ಲದೆ..||೧||


ಬಾ ಒಮ್ಮೆ ಕಣ್ಣಂಚಿಗೆ ನೀ ಕಾಡದೆ.. ಬಾ ಒಮ್ಮೆ ಕಣ್ಣಂಚಿಗೆ...
ಸಾವೀಗ ನನ್ನಂಚೆಗೆ ಮಾತಾಡದೆ.. ಸಾವೀಗ ನನ್ನಂಚೆಗೆ..


ದಣಿವಾರಿಸೋ ಸುಧೆಯಂತೆ ನೀ, ಬಳಿಸಾರುತಾ ತೂಳಲ್ಲಿಯೇ..
ಭಣಗುಟ್ಟಿದೆ ಜಗವೆಲ್ಲವೂ ಕ್ಷಣಕಾಯುತಾ ನಿಂಗಾಗಿಯೇ..
ನಗುವಿಲ್ಲದೇ ಬರಿಕತ್ತಲು..
ಕಳೆಗುಂದಿದೆ ಭುವಿ ಸುತ್ತಲೂ
ಬಾನಂತೆ ಬೆಳಕಿಲ್ಲದೆ.... ಬಾನಂತೆ ಬೆಳಕಿಲ್ಲದೆ...||೨||




ಬಾ ಒಮ್ಮೆ ಕಣ್ಣಂಚಿಗೆ ನೀ ಕಾಡದೆ.. ಬಾ ಒಮ್ಮೆ ಕಣ್ಣಂಚಿಗೆ...
ಸಾವೀಗ ನನ್ನಂಚೆಗೆ ಮಾತಾಡದೆ.. ಸಾವೀಗ ನನ್ನಂಚೆಗೆ..

ನೋವಲ್ಲಿಯೇ ಬೆರೆತಾಗಿದೆ..
ಈಗೆಲ್ಲವೂ ಬರಿದಾಗಿದೆ..
ಹೂವಂತೆ ಕಂಪಿಲ್ಲದೇ...  ಹೂವಂತೆ ಕಂಪಿಲ್ಲದೇ...||



Monday, April 16, 2012

( "ಅಣ್ಣಾ ಬಾಂಡ್" ಚಿತ್ರದ, "ಏನೆಂದು ಹೆಸರಿಡಲಿ.." ಹಾಡಿನ ರಾಗಕ್ಕೆ ನನ್ನ ಸಾಲುಗಳ ಸ್ಪರ್ಶ..!!!!!)


ಬಾನಲ್ಲಿ ಸ್ವರಸುರಿವ ಬಾನಾಡಿ ಕುಣಿಯುತಿದೆ..
ನೀನಿಲ್ಲಿ ಜೊತೆಯಿರುವ ಹಾಡೊಂದು ಹೆಣೆಯುತಿದೆ..
ಈ ನೋಟದ ಆಂತರ್ಯ ನಿಂದಾಗಿದೆ
ಹೂಮೇಳದ ಸೌಂದರ್ಯ ಬಂದಾಗಿದೆ..||



ಬಾನಲ್ಲಿ ಸ್ವರಸುರಿವ ಬಾನಾಡಿ ಕುಣಿಯುತಿದೆ..
ನೀನಿಲ್ಲಿ ಜೊತೆಯಿರುವ ಹಾಡೊಂದು ಹೆಣೆಯುತಿದೆ..



ಏನಿಂಥ ಧಾವಂತ ಈ ಪ್ರೀತಿ ಸೆಳೆಯಲು..
ನಾನಂತೂ ಜೀವಂತ ನೀನೊಮ್ಮೆ ಸುಳಿಯಲು..
ಹೊಸ ನೌಕೆ ಹೊತ್ತು ಬಯಕೆ, ಕಣ್ಣಲ್ಲೇ ನಿಂತಾಯ್ತು..
ರುಜು ಹಾಕು ನಿನ್ನ ಹೆಸರ ಎದೆಯಲಿ ಕೂತು..
ತಲ್ಲೀನದ  ಈ ಚರ್ಯೆ ಚಂದಾಗಿದೆ..
ಎಂದಿಲ್ಲದ ಆಶ್ಚರ್ಯ ನಂದಾಗಿದೆ..||1||



ಬಾನಲ್ಲಿ ಸ್ವರಸುರಿವ ಬಾನಾಡಿ ಕುಣಿಯುತಿದೆ..
ನೀನಿಲ್ಲಿ ಜೊತೆಯಿರುವ ಹಾಡೊಂದು ಹೆಣೆಯುತಿದೆ..




ಬೇರೆಲ್ಲೂ ಯಾರಿಲ್ಲ ನಿನ್ನಂತೆ ನಗೆಯಲಿ..
ನಿನ್ನೆಲ್ಲ ಮಾತಿಲ್ಲಿ ನೀರಂತೆ ಧಗೆಯಲಿ..
ಹಸಿಯಾದ ಪ್ರಣಯಕ್ಕಿಂದು ಬೇಕೊಂದು ಕಾದಾಟ..
ಮೃದುವಾಗಿ ಅರಳೋ ಹಾಗೆ ಕನಸಿನ ತೋಟ..
ಆಲಾಪದ ಮಾಧುರ್ಯ ತಂದಾಗಿದೆ..
ಮುದ್ದಾಡುವ ಔದಾರ್ಯ ನಿಂದಾಗದೆ.??!! ||2||



ಬಾನಲ್ಲಿ ಸ್ವರಸುರಿವ ಬಾನಾಡಿ ಕುಣಿಯುತಿದೆ..
ನೀನಿಲ್ಲಿ ಜೊತೆಯಿರುವ ಹಾಡೊಂದು ಹೆಣೆಯುತಿದೆ..
ಈ ನೋಟದ ಆಂತರ್ಯ ನಿಂದಾಗಿದೆ
ಹೂಮೇಳದ ಸೌಂದರ್ಯ ಬಂದಾಗಿದೆ..||