Monday, April 23, 2012


( ಈ ಹಾಡು, "ಗೆಳೆಯ" ಚಿತ್ರದ "ಈ ಸಂಜೆ ಯಾಕಾಗಿದೆ.." ಎಂಬ ಹಾಡಿನ ರಾಗದಲ್ಲಿ ಬರೆದ ಹೊಸ ಸಾಹಿತ್ಯ..)


ಬಾ ಒಮ್ಮೆ ಕಣ್ಣಂಚಿಗೆ ನೀ ಕಾಡದೆ.. ಬಾ ಒಮ್ಮೆ ಕಣ್ಣಂಚಿಗೆ...
ಸಾವೀಗ ನನ್ನಂಚೆಗೆ ಮಾತಾಡದೆ.. ಸಾವೀಗ ನನ್ನಂಚೆಗೆ..

ನೋವಲ್ಲಿಯೇ ಬೆರೆತಾಗಿದೆ..
ಈಗೆಲ್ಲವೂ ಬರಿದಾಗಿದೆ..
ಹೂವಂತೆ ಕಂಪಿಲ್ಲದೇ...  ಹೂವಂತೆ ಕಂಪಿಲ್ಲದೇ...||




ಬಾ ಒಮ್ಮೆ ಕಣ್ಣಂಚಿಗೆ ನೀ ಕಾಡದೆ.. ಬಾ ಒಮ್ಮೆ ಕಣ್ಣಂಚಿಗೆ...






ಬೇಜಾರಿನ ತುಸುತಾಪಕೆ ಎದೆಯಾಳದಿ ರೂಪಾಂತರ..
ಕನಸಲ್ಲಿಯೇ ಒಂದಾದರೂ ಇನ್ನೇತಕೆ ಈ ಅಂತರ..
ಉಸಿರಾಡದೆ ಮಿಡಿವ ಮನ..
ಹೊರಳಾಡಿದೆ ಬಡಜೀವನ..
ಮೀನಂತೆ ನೀರಿಲ್ಲದೆ.. ಮೀನಂತೆ ನೀರಿಲ್ಲದೆ..||೧||


ಬಾ ಒಮ್ಮೆ ಕಣ್ಣಂಚಿಗೆ ನೀ ಕಾಡದೆ.. ಬಾ ಒಮ್ಮೆ ಕಣ್ಣಂಚಿಗೆ...
ಸಾವೀಗ ನನ್ನಂಚೆಗೆ ಮಾತಾಡದೆ.. ಸಾವೀಗ ನನ್ನಂಚೆಗೆ..


ದಣಿವಾರಿಸೋ ಸುಧೆಯಂತೆ ನೀ, ಬಳಿಸಾರುತಾ ತೂಳಲ್ಲಿಯೇ..
ಭಣಗುಟ್ಟಿದೆ ಜಗವೆಲ್ಲವೂ ಕ್ಷಣಕಾಯುತಾ ನಿಂಗಾಗಿಯೇ..
ನಗುವಿಲ್ಲದೇ ಬರಿಕತ್ತಲು..
ಕಳೆಗುಂದಿದೆ ಭುವಿ ಸುತ್ತಲೂ
ಬಾನಂತೆ ಬೆಳಕಿಲ್ಲದೆ.... ಬಾನಂತೆ ಬೆಳಕಿಲ್ಲದೆ...||೨||




ಬಾ ಒಮ್ಮೆ ಕಣ್ಣಂಚಿಗೆ ನೀ ಕಾಡದೆ.. ಬಾ ಒಮ್ಮೆ ಕಣ್ಣಂಚಿಗೆ...
ಸಾವೀಗ ನನ್ನಂಚೆಗೆ ಮಾತಾಡದೆ.. ಸಾವೀಗ ನನ್ನಂಚೆಗೆ..

ನೋವಲ್ಲಿಯೇ ಬೆರೆತಾಗಿದೆ..
ಈಗೆಲ್ಲವೂ ಬರಿದಾಗಿದೆ..
ಹೂವಂತೆ ಕಂಪಿಲ್ಲದೇ...  ಹೂವಂತೆ ಕಂಪಿಲ್ಲದೇ...||



1 comment: