ಎಂದೆಂದು ತನ್ನಸುಗೆ ಕುಂದಿಲ್ಲದಾ ವರವ ಛಂದಾಗಿ ಬೊಮ್ಮನೆರೆಯೆ
ನಿಂದಾತ್ಮ ತಾ ಗುಹನು ಕೊಂದಾಡೆ ಸಜ್ಜನರ ವಂದಾರುಲೋಕ ಕರೆಯೆ..
ಸಿಂಧೂತ್ಠಳಾ ರಮಣ ಮಂದಾಕಿನೀಂದುಧರರೊಂದಾಗಿ ದೇಹ ತೆರೆಯೆ
ಬಂದಾರು ದೈತ್ಯನನು ಕೊಂದಾರು ಕಲ್ಲಿನಲಿ ನಿಂದಾರು ಲೋಕ ಪೊರೆಯೆ..||೧||
ಏನೀಗ ಬಣ್ಣಿಸಲಿ ತಾನಾಗೆ ಭೂಮಿಗಿಳಿದಾನಮ್ಯನಾಸ್ಯಸುಖವಂ
ಆ ನಾಕದಾಣ್ಮರ ಭಯಾನೇಕವಂ ತೊಡೆದು ಮಾನಾದ್ಯವಿತ್ತ ಬಲವಂ..
ಹೀನಾತ್ಮರಿಂ ಸಿಗದಿಹೀ ನಾಥ ದಾಸರಿಗೆ ನಾನಾರ್ಥವಿತ್ತು ಪೊರೆವಂ
ಜ್ಞಾನೈಕಗಮ್ಯ ಸುರಗಾನಪ್ರಕೀರ್ತಿತನು ಮೀನಾದಿರೂಪಕಶಿವಂ..||೨||
ಪಕ್ಷೀಶಗಾಪರಿಮಿತಾಕ್ಷೇಶನುಂ ದಿವಿಜಯಕ್ಷಾದಿಸಂನಮಿತನುಂ
ತ್ರ್ಯಕ್ಷಂ ಜಗತ್ರಿತಯರಕ್ಷಂ ವಿಭೂತವಿಸರಾಕ್ಷಾಯಮಾನಶಿವನುಂ..
ಲಕ್ಷ್ಮೀಸಮುಲ್ಲಸಿತವಕ್ಷಸ್ಥಲಮ್ ಜನಪದಕ್ಷಾತ್ಮಜೇಕ್ಷಕಶುಭಂ
ಆಕ್ಷೋಭಿತಾಹಿತಜನಾಕ್ಷೇಪಣಂ ತ್ರಿಪುರರಕ್ಷೋಧಿಪಕ್ಷಯಕರಂ..||೩||
ಸೊಂಪಾದ ಕೋಲಜಳ ತಂಪಾದ ವಾರ್ಗಮನದಿಂ ಪಾಪದೋಘ ಕಳೆದು
ಕಂಪಾದ ಪತ್ರಗಣದಿಂ ಪಾರಿಜಾತಮುಖಸಂಪುಷ್ಪದಿಂ ಪ್ರಭುವಿನ..
ಕೆಂಪಾದ ನೀರಭವವಂ ಪೋಲ್ವ ಪಾದಯುಗವಂ ಪೂಜಿಸಿ ಪ್ರತಿದಿನಂ
ಮಾಂಪಾಹಿ ಎಂದೆನಲಲಂ ಪಾವನಾತ್ಮಹರಿಪಂಪೇಶ್ವರಂ ಸಲಹುವಂ ..||೪||
ಕೊನೆಯ ಚಾರಣದ ಸಾದೃಶ್ಯತೆ ಮನಸ್ಸಿನಲ್ಲೇ ಉಳಿಯುವಂತಿದೆ ಗೆಳೆಯ.
ReplyDeleteಅದಕ್ಕಿಂತಲೂ ಮುನ್ನ, ಲಕ್ಷ್ಮೀಸಮುಲ್ಲಸಿತವಕ್ಷಸ್ಥಲಮ್ ಎಂತ ಏಕೀಭಾವ ಭಾವ.