Monday, December 26, 2011

( ಈ ಹಾಡು "ಗೋಕುಲ" ಚಿತ್ರದ, "ಆರಾಮಾಗೆ ಇದ್ದೆ ನಾನು, ನಿನ್ನ ಕಂಡು ಅರೆ ಏನಾಯಿತು.." ಎಂಬ ಹಾಡಿನ ಧಾಟಿಗೆ ಬರೆದ ಹೊಸ ಸಾಹಿತ್ಯ..)

ಬೇರೆ ಏನೂ, ಕಾಣೆ ನಾನು,
ನೀನು ಬಂದ ಈ ಕ್ಷಣದಿಂದಲೇ
ಈ ಕ್ಷಣದಿಂದಲೇ ನವಿರಾದ ಸೆಲೆ, ಚಿಗುರೊಡೆದಂತೆ ನನ್ನೆದೆಯಿಂದಲೇ..
ಹರಡಿದೆ ಈಗಲೇ, ಕಿರುನಗೆಯ ಬಲೆ, ಮುಗಿಲೆತ್ತರಕೂ ಭುವಿಯಿಂದಲೇ...||

ಬೇರೆ ಏನೂ, ಕಾಣೆ ನಾನು,
ನೀನು ಬಂದ ಈ ಕ್ಷಣದಿಂದಲೇ........
 
ಸುರಿಯಿತು ಕನಸು ಸುರಿಯಿತು, ಮೃದುಮಿಂಚಿನ ಓಕುಳಿಯೊಂದನು..
ಬರೆಯಿತು ಮನವು ಬರೆಯಿತು, ನಿನ ಅಂಚೆಗೆ ಓಲೆಯನೊಂದನು..
ಈಗಲೇನೆ ಶುಭತಾರಾಯೋಗ..
ಪ್ರೀತಿಯಲ್ಲಿ ಜೋಡಿಯಾಗು ಬೇಗ..
ಹೊಸಕುಸುರಿಕಲೆ, ಈ ಕ್ಷಣದಿಂದಲೇ, ಅರಳಿದೆ ಮಧುರ ನೆನಪಿಂದಲೇ....||1||

ಬೇರೆ ಏನೂ, ಕಾಣೆ ನಾನು,
ನೀನು ಬಂದ ಈ ಕ್ಷಣದಿಂದಲೇ......
 
ಬೆರೆಯಿತು ಭಾವ ಬೆರೆಯಿತು, ಈ ನೋಟದ ಸಂಗಮದಲ್ಲಿಯೇ..
ಮೆರೆಯಿತು ಜೀವ ಮೆರೆಯಿತು, ಅತಿನೂತನ ಸಂಭ್ರಮದಲ್ಲಿಯೇ..
ಹೇಳದೇನೇ ಒಮ್ಮೆ ಕೇಳದೇನೇ 
ಮೋಡಿ ಮಾಡಿ ಕಾಡಿದಾಕೆ ನೀನೆ...
ಬದಲೀಗ ನೆಲೆ, ಈ ಕ್ಷಣದಿಂದಲೇ, ನವಸೌಧಕೆ ನಿನ್ನೊಲವಿಂದಲೇ...||2||

ಬೇರೆ ಏನೂ, ಕಾಣೆ ನಾನು,
ನೀನು ಬಂದ ಈ ಕ್ಷಣದಿಂದಲೇ
ಈ ಕ್ಷಣದಿಂದಲೇ ನವಿರಾದ ಸೆಲೆ, ಚಿಗುರೊಡೆದಂತೆ ನನ್ನೆದೆಯಿಂದಲೇ..
ಹರಡಿದೆ ಈಗಲೇ, ಕಿರುನಗೆಯ ಬಲೆ, ಮುಗಿಲೆತ್ತರಕೂ ಭುವಿಯಿಂದಲೇ...||

No comments:

Post a Comment