Wednesday, May 4, 2011

( ಈ ಹಾಡು " ಮುಂಗಾರು ಮಳೆ " ಚಿತ್ರದ, " ಅನಿಸುತಿದೆ ಯಾಕೋ ಇಂದು " ಎಂಬ ಹಾಡಿನ ರಾಗದಲ್ಲಿ ಬರೆದ ಹೊಸ ಸಾಹಿತ್ಯ )

                 ಕರೆಯುತಿದೆ ನನ್ನ ನಯನ,
                 ಹೃದಯ ಮಂದಿರಕೆ ನಿನ್ನ..
                 ಪ್ರೇಮದ ಈ ಸಿಹಿ ಪಯಣ,
                 ನಡೆವೆಯಾ, ಜೊತೆಯಲಿ ನನ್ನ..
                    ನಿನ್ನ..ಕುರಿತೇ ಎಲ್ಲ ಯೋಚನೆ...
                  ಕ್ಷಣಕೂ ನವ್ಯ ಭಾವನೆ ತರುವ..
                        ಪ್ರೀತಿ ಹೀಗೇನೇ.....||

                 ಕರೆಯುತಿದೆ ನನ್ನ ನಯನ.....

                 ಸುಮಗಳ ಎಸಳಿನ ತುಟಿಯಲಿ, ನಿಲ್ಲದ ನಗುವಿದೆ..
                 ರವಿಸಮ ಮೊಗದಲಿ ಮುಗಿಯದ ಕಾಂತಿಯ ಸೊಗಸಿದೆ..
                 ಗಗನದಿ ಕಾಣದ ತಾರೆಯೊಂದ ಭುವಿಯಲಿ ಹಗಲೇ ಕಂಡಿರುವೆ..
                    ನೀನೇ ಮನದಿ ನಿಂತ ಕಲ್ಪನೆ..
                 ನಿನ್ನ ಒಲವ ಧಾರೆಗೆ ತುಡಿವ..
                        ಪ್ರೀತಿ ಹೀಗೇನೇ...|| ೧ ||

                 ಕರೆಯುತಿದೆ ನನ್ನ ನಯನ......

                 ಸುಮಧುರ ಕನಸಿನ ಎಳೆಯಲಿ ಬದುಕನೇ ನೇದಿಹೆ..
                 ಎದೆಯಾಳದಿ ಹೊಳೆವ ದೀಪದಿ ನಿನ್ನನೇ ನೋಡಿಹೆ..
                 ಸಾವಿರ ಜನ್ಮಕೂ ನೀನೆ ನನ್ನ ಹೃದಯವನಾಳಲು ಬಯಸಿರುವೆ..
                       ಇದೇ ವಿಧಿಗೂ ಮನದ ಯಾಚನೆ..
                    ನಿನ್ನನಗಲಿ ಇರುವುದನರಿಯೇ..
                           ಪ್ರೀತಿ ಹೀಗೇನೇ...|| ೨ ||

                  ಕರೆಯುತಿದೆ ನನ್ನ ನಯನ,
                  ಹೃದಯ ಮಂದಿರಕೆ ನಿನ್ನ..
                  ಪ್ರೇಮದ ಈ ಸಿಹಿ ಪಯಣ,
                  ನಡೆವೆಯಾ, ಜೊತೆಯಲಿ ನನ್ನ..
                      ನಿನ್ನ..ಕುರಿತೇ ಎಲ್ಲ ಯೋಚನೆ...
                    ಕ್ಷಣಕೂ ನವ್ಯ ಭಾವನೆ ತರುವ..
                        ಪ್ರೀತಿ ಹೀಗೇನೇ.....||

No comments:

Post a Comment