Wednesday, May 4, 2011

( ಈ ಹಾಡು " ಮನಸಾರೆ " ಚಿತ್ರದ , " ಎಲ್ಲೋ ಮಳೆಯಾಗಿದೆ ಎಂದು " ಎಂಬ ಹಾಡಿನ ರಾಗದಲ್ಲಿ ಬರೆದ ಹೊಸ ಸಾಹಿತ್ಯ )


            ನಿಂದೇ ನವಿರಾಗಿಹ ಕನಸು ಬಲವಾಗಿ ಕಾಡುತಿದೆ..
            ಇಂದೇ ಸವಿಯಾಗಿಹ ಮನಸು ಒಲವಾಗಿ ಹಾಡುತಿದೆ...|
            ಹೊಸ ರಂಗನು ಬದುಕಿನ ಭಿತ್ತಿಯಲಿ, ಚೆಲ್ಲುತ ನೀ ಸೆಳೆದೆ
            ನಿನ್ನ ಗುಂಗಿನಲಿರುವ ವೃತ್ತಿಯಲಿ , ಮೆಲ್ಲಗೆ ನಾನಿಳಿದೆ.....||

            ನಿನ್ನನು ನೋಡಿದ ರಸಘಳಿಗೆ, 
            ತೇಲಿದೆ ನಾ ಮುಗಿಲಿನಲಿ..
            ನೀಡಿದೆ ನೀನು ಅರಿವಳಿಕೆ, 
            ಹೂಮೊಗದ ನಗುವಿನಲಿ ......
               ಅಪಹಾರವ ಮಾಡಿದೆ ಕ್ಷಣದೊಳಗೆ,
                        ಹೃದಯವ ಸುಳಿವಿಡದೆ..
               ಪರಿಹಾರವ ನೀಡಲೇಬೇಕೆನಗೆ,
                         ಸನಿಹವೇ ಇರು ಬಿಡದೆ...|| ೧ ||

             ನಿಂದೇ ನವಿರಾಗಿಹ ಕನಸು ಬಲವಾಗಿ ಕಾಡುತಿದೆ..
             ಇಂದೇ ಸವಿಯಾಗಿಹ ಮನಸು ಒಲವಾಗಿ ಹಾಡುತಿದೆ...

             ಹೊಮ್ಮಿದೆ ಸುಂದರ ಸೂಚನೆಯು,
             ಕಣ್ಣೊಳಗೆ ಪ್ರೀತಿಯದೇ..
             ತುಂಬಿದೆ ಬಂಧುರ ಭಾವನೆಯು, 
             ನನ್ನೊಳಗೆ ನಿನ್ನಯದೇ ......
                ನಿನ್ನ ನಾಮವ ಜಪಿಸುತ ಹರ್ಷದಲಿ,
                           ನನ್ನೆದೆ ಕುಣಿಯುತಿದೆ ..
                ಈ ಪ್ರೇಮದ ಅಲೆಗಳ ಸ್ಪರ್ಶದಲಿ,
                            ಜೀವವು ತಣಿಯುತಿದೆ ...  || ೨ ||


            ನಿಂದೇ ನವಿರಾಗಿಹ ಕನಸು ಬಲವಾಗಿ ಕಾಡುತಿದೆ..
            ಇಂದೇ ಸವಿಯಾಗಿಹ ಮನಸು ಒಲವಾಗಿ ಹಾಡುತಿದೆ...|
            ಹೊಸ ರಂಗನು ಬದುಕಿನ ಭಿತ್ತಿಯಲಿ, ಚೆಲ್ಲುತ ನೀ ಸೆಳೆದೆ
            ನಿನ್ನ ಗುಂಗಿನಲಿರುವ ವೃತ್ತಿಯಲಿ , ಮೆಲ್ಲಗೆ ನಾನಿಳಿದೆ....||

No comments:

Post a Comment